ಭೂಮಿ ಗುಂಡಾಗಿದೆ ನಿಜತಾನೆ?

ಹುರಿಹೊಸೆದ ಹಗ್ಗದಲಿ ಹಾವು ಕಂಡಿತೆ, ಪಾಪ!
ಬರಿಯುಸಿರು ಬಿಟ್ಟವರೆ ಇಲ್ಲಿ ಕೇಳಿ;
ತುದಿಗಾಲ ಮೇಲೇಕೆ ನಿಲ್ಲುವಿರಿ? ಬಣ್ಣದುರಿ
ಹಳೆಮನೆಯ ಉರಿಸಿದರೆ ತಪ್ಪೆ ಹೇಳಿ.

ಅಜ್ಜ ಮೊಮ್ಮಗು ಮಾತು ನಮಗೇಕೆ ಬಿಟ್ಟುಬಿಡಿ
ಮಣ್ಣು ಹಡೆದದ್ದರಿತೆ ಪ್ರೀತಿ ನೀತಿ ;
ಮುಟ್ಟಿದರೆ ಮೈಲಿಗೆ, ಗೆದ್ದವರ ಸಾಲಿಗೆ
ತೆಪ್ಪ ತೇಲಿತು ಬನ್ನಿ ತೆರೆಮೇಲಕೆ.

ಬಣ್ಣಬಣ್ಣದ ಗುಳ್ಳೆ ಬಾಳಂತೆ, ಇರಬಹುದು
ನೀರು ಒಡೆಯುವುದಿಲ್ಲ ಚಿಂತೆ ಏಕೆ?
ಆಟವಾಡಿದ ಜನರು ಹೇಳಿದುದ ಕೇಳಿದಿರ?
ಔಟು ಜೂಟುಗಳೆಲ್ಲ ಕುಣಿವ ನೆಪಕೆ.

ಹರಿದು ಹೋಯಿತು ನನ್ನ ಹಳೆಯ ಪುಸ್ತಕ, ಎಸೆದು
ಆನಂದ ಹೊಸ ‘ಕಾಪಿ’ ಕೊಂಡು ತಂದ;
ಹಳೆ ತಪ್ಪ ತಿದ್ದಿ ಹೊಸ ಹಾಳೆಯಲಿ ಮುದ್ರಿಸಿದೆ
ನೀವೇನೆ ಹೇಳಿ ಇದು ಅದಕು ಚಂದ.

ನೆರೆಯವರು ಯಾರೆಂದೆ ಇನ್ನು ಗೊತ್ತಿಲ್ಲ,
ವರುಷಗಳೆ ಉರುಳಿದುವು ಇಲ್ಲಿ ಬಂದು!
ಮತ್ತೆ ಹೊಕ್ಕುಳ ಸುತ್ತ ದೃಷ್ಟಿ ಸುತ್ತುತ್ತ ಇದೆ
ಹಳೆಯ ಕಥೆ ಕನಸುಗಳ ನೆನಪ ಕೊಂದು.

ಹೆರಳ ಮರೆಯಲಿ ನಿಂತು ಮಲ್ಲಿಗೆಯ ಮೂಸಿದೆವು
ಪರಿಮಳಕೆ ಅರಳಿದುವು ನೂರು ಕನಸು;
ಕತ್ತಲಿನ ಬಟ್ಟಲಲಿ ಬೆಳುದಿಂಗಳನು ತುಂಬಿ
ಮುಖ ಆಚೆ ಬದಿಗಿಹುದು, ಹಡೆದ ನನಸು.

ತೂಬು ತೆರೆಯಲು ನಿನಗೆ ಹಿಂಜರಿಕೆ ಬೇಕಿಲ್ಲ
ಇದೆ ಮೋಡ ಕಡಲು ಕೆರೆಯೊಡಲು ಬಿಸಿಲು;
ನೀರು ತುಂಬಲಿ ನಾಳೆ, ಸರಿಸು ಓದಿದ ಹಾಳೆ
(ಆಟವಾಡಿದ ಜನರ ಮಾತು ಮೇಲೆ).

ಹತ್ತು ವರುಷದ ಹಿಂದೆ ಮತ್ತೂರ ತೇರಿನಲಿ
ಅತ್ತಿತ್ತ ಸುಳಿದವರು ನಾವೇನೆ!
ಹತ್ತು ವರುಷದ ಮೇಲೆ ಮತ್ತೆ ಬರುವೆವು ಬಿಡಿ
ಭೂಮಿ ಗುಂಡಾಗಿದೆ ನಿಜತಾನೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಋಣೋದಯ
Next post ಬಾರೈ ಬಾರೈ ಹೋಳಿ ಕಾಮಾ

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys